Uncategorized

ಜಾತಿ ನಿಂದನೆ : ಬಂಧನಕ್ಕೆ ಬಸವರಾಜ ಹೂನೂರು ಆಗ್ರಹ

ಹನುಮಂತ ನಾಯಕ ಸಂಪಾದಕ.    9739109997

ಮುದಗಲ್ ಬೆಳಗಾವಿ ಡಿಸಿಸಿ ಚುನಾವಣೆ ವೇಳೆ ಜಾತಿ ನಿಂದನೆ ಮಾಡಿರುವ ಡಿಸಿಸಿ ಬ್ಯಾಂಕನ ಮಾಜಿ ಅಧ್ಯಕ್ಷ ರಮೇಶ ವಿಶ್ವನಾಥ ಕತ್ತಿ ರವರನ್ನು ಈ ಕೂಡಲೆ ಬಂಧಿಸಬೇಕು ಎಂದು ಕರ್ನಾಟಕ ವಾಲ್ಮೀಕಿ ನಾಯಕ ಯುವ ಪಡೆ ಮುದಗಲ್ ಹೋಬಳಿ ಘಟಕ ಅಧ್ಯಕ್ಷ ಬಸವರಾಜ ನಾಯಕ ಹೂನೂರು ಆಗ್ರಹಿಸಿದ್ದಾರೆ

ಸೋಮುವಾರ ಪತ್ರಿಕೆಗೆ ಹೇಳಿಕೆ ನೀಡಿರುವ ಅವರು
ಬೆಳಗಾವಿ ನಗರದ ಬಿ ಕೆ ಮಾಡೆಲ್ ಸ್ಕೂಲದ ಆವರಣದಲ್ಲಿ ಡಿಸಿಸಿ ಬ್ಯಾಂಕನ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕನ ಮಾಜಿ ಅಧ್ಯಕ್ಷ ರಮೇಶ ವಿಶ್ವನಾಥ ಕತ್ತಿ, ಸಾ: ಬೆಲ್ಲದ ಬಾಗೇವಾಡಿ, ಬೆಳಗಾವಿ ಇವನು ವಾಲ್ಮೀಕಿ ಸಮುದಾಯ ಕುರಿತು ಬೇಡರ ಸೂಳೆ ಮಕ್ಕಳು ಎಂಬ ಅವಾಚ್ಯ ಶಬ್ದಗಳಿಂದ ಅವಮಾನಿಸಿದ್ದು ರಾಜ್ಯದ 60 ಲಕ್ಷ ವಾಲ್ಮೀಕಿ ಸಮುದಾಯದ ಮನಸ್ಸಿಗೆ ತಿವೃಘಾಸಿ ಮಾಡುವ ಮೂಲಕ ಸಮುದಾಯದ ಭಾವನೆಗಳಿಗೆ ದಕ್ಕೆ ಮಾಡಿದ್ದಾರೆ ಪ್ರತಿ ಚುನಾವಣೆ ಸಂದರ್ಭದಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳಿಗೆ ಸೋಲು ಗೆಲುವು ಸಾಮಾನ್ಯ ಆದರೆ ಜಾತಿ ನಿಂದನೆ ಮಾಡಿರುವದ ಖಂಡನೀಯವಾಗಿದೆ ಈ ಕೂಡಲೆ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button