World

ಮುದಗಲ್ ಕಳ್ಳರ ಬಂಧನ ; ಆರೋಪಿಗಳಿಂದ 10 ಗ್ರಾಂ ಚಿನ್ನ ಹಾಗೂ ಎರಡು ಲಕ್ಷ ಹಣ ವಶಕ್ಕೆ ಪಡೆದ ಪೊಲೀಸರು

ಹನುಮಂತ ನಾಯಕ ಸಂಪಾದಕರು

ಮುದಗಲ್ : ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳನನ್ನು ಬಂಧಿಸಿ, ಆತನಿಂದ 2 ಲಕ್ಷ ಹಣ ಹಾಗೂ 10 ಗ್ರಾಂ ಚಿನ್ನದ ಆಭರಣಗಳನ್ನ ಮರುವಶಪಡಿಸಿಕೊಳ್ಳುವಲ್ಲಿ ಸ್ಥಳೀಯ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಪಿಎಸ್ಐ ವೆಂಕಟೇಶ 11-02-25 ರಂದು ನಾಗರಹಾಳ ಗ್ರಾಮದಲ್ಲಿ ಶಂಕ್ರಮ್ಮ ಗಂ ಶಿವುಪುತ್ರಪ್ಪ ಹಾಗೂ 27-04-25 ರಂದು ರಂದು ಅಶೋಕ್ ತಂದೆ ವೀರುಪಾಕ್ಷಪ್ಪ ನಾಗರಾಳ ಎನ್ನುವವರ ಮನೆ ಕಳ್ಳತನಾಗಿದ್ದು ಇವರ ಪ್ರಕರಣ ದಾಖಲಾಗಿದ್ದು. ಈ ಪ್ರಕರಣಗಳ ಪತ್ತೆ ಕುರಿತು ರಾಯಚೂರು ಜಿಲ್ಲಾ ಎಸ್ಪಿ ಪುಟ್ಟಮಾದಯ್ಯ, ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಕುಮಾರಸ್ವಾಮಿ, ಹೆಚ್ಚುವರಿ ಅಧೀಕ್ಷಕರಾದ ಜಿ.ಹರೀಶ್ ಲಿಂಗಸ್ಗೂರು ಡಿವೈಎಸ್​ ಅವರ ನೇತೃತ್ವದಲ್ಲಿ ಸ್ಥಳೀಯ ಪಿಎಸ್ಐ ವೆಂಕಟೇಶ ಸಿಬ್ಬಂದಿಗಳಾದ ವೆಂಕಟೇಶ ಎಚ್, ಅಮರೇಶ ಎಚ್ ಕೆ, ಹನುಮಂತ, ಅನೀಲ್ ಕುಮಾರ್ ಇವರನ್ನೊಳಗೊಂಡವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡದಿಂದ ಆರೋಪಿ ಶಿವಪ್ಪ ಶೇಖರಪ್ಪ ನಾಗರಾಹಾಳ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಒಟ್ಟು ಅಂದಾಜು 3 ಲಕ್ಷ ವಶ ಪಡಿಸಿಕೊಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

Back to top button