ಬಾಗಲವಾಡ ದಿಂದ ಮಾನ್ವಿ ಗೆ ತೆರಳುವ ಮುಖ್ಯ ರಸ್ತೆ ಕಾದಿದೆ ಅಪಾಯಕಾರಿ ಹಳ್ಳದ ಸೇತುವೆ

ಹನುಮಂತ ನಾಯಕ ಸಂಪಾದಕ. 9739109997
ಸಿರವಾರ:: ಸಿರವಾರ ತಾಲೂಕಿನ ಸಮೀಪದ ಬಾಗಲವಾಡ ಗ್ರಾಮದ ಪಕ್ಕದಲ್ಲಿ ಇರುವ ಹಳ್ಳದ ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕವಿತಾಳದಿಂದ ಮಾನ್ವಿ ಸಂಪರ್ಕಿಸುವ ಮುಖ್ಯ ರಸ್ತೆಗೆ ಅಡ್ಡ ನಿರ್ಮಿಸಿರುವ ಹಳದ ಸೇತುವೆ ಯಾವುದೇ ಕ್ಷಣದಲ್ಲಾದರೂ ಕುಸಿಯುವ ಭೀತಿ ಎದುರಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಲಿಂಗಯ್ಯ ನಾಯಕ ಸೈದಾಪುರ ಹೇಳಿದರು
ಸೇತುವೆ ನಿರ್ಮಿಸಿ ಎಷ್ಟೋ ವರ್ಷ ಕಳೆದಿದೆ ಅಂದಿನ ವಾಹನ ದಟ್ಟಣೆಗೆ ಅನುಗುಣವಾಗಿ ನಿರ್ಮಾಣವಾಗಿದ್ದ ಕಿರಿದಾದ ಸೇತುವೆ ಇಂದು ಕವಿತಾಳ ಮತ್ತು ಮಾನ್ವಿ ಭಾಗದ ಪ್ರತಿದಿನ ನೂರಾರು ಲಾರಿ, ಬಸ್, ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಸೇರಿದಂತೆ ಭಾರಿ ವಾಹನಗಳು ಇದರ ಮೇಲೆಯೇ ಸಂಚರಿಸುತ್ತವುದು ಮಳೆಗಾಲದಲ್ಲಿ ಹಳ್ಳ ತುಂಬಿ ಬರುತ್ತದೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಿದೆ ಹಾಗೂ ಕಾಂಕ್ರೀಟ್ ಸಂಪೂರ್ಣವಾಗಿ ಕಿತ್ತುಹೋಗಿದ್ದರು ವರ್ಷಗಳ ಕಳೆದರೂ ಇತ್ತಾ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಬಸವರಾಜ ಮಲ್ಲಟ ನಾಗೇಶ್ ನಾಯಕ ನವಲಕಲ್ ಇನ್ನೂ ಅನೇಕರು ಉಪಸ್ಥಿತರಿದ್ದರು



