ಡಿಕೆ ಶಿವಕುಮಾರ್ ಹಾಗೂ ನಟ ಸುದೀಪ್ ಅವರನ್ನು ನೋಡಿ ಕೆಕೆ ಹಾಕಿದ ಜನರು
ಹನುಮಂತ ನಾಯಕ ಸಂಪಾದಕ -9739109997
ಸಿಂಧನೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ನಟ ಕಿಚ್ಚ ಸುದೀಪ್ ಸಿಂಧನೂರಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಜನರು ನೋಡು ನೋಡುತ್ತಿದ್ದಂತೆ ಕೆಕೆ ಹಾಕಿ ಸಂಭ್ರಮ ಪಟ್ಟರು.
ಬಸನಗೌಡ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಸಿಂಧನೂರಿಗೆ ಆಗಮಿಸಿದ ನಟ ಕಿಚ್ಚ ಸುದೀಪ್ ಅವರನ್ನು ನೋಡಲು ಸಾವಿರಾರು ಮಂದಿ ಆಗಮಿಸಿದ್ದರು ಇದೇ ವೇಳೆ ಕಿಚ್ಚ ಕಿಚ್ಚ ಎಂದು ದೊಡ್ಡ ಧ್ವನಿಯಿಂದ ಕೆಕೆಹಾಕಿ ಸಂಭ್ರಮಿಸಿದರು.
ಕಿಚ್ಚ ಸುದೀಪ್ ರನ್ನು ಅದ್ದೂರಿ ಮೆರವಣಿಗೆ : ಮೊದಲ ಬಾರಿ ಸಿಂಧನೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಚಿತ್ತ ನಟ ಕಿಚ್ಚ ಸುದೀಪ್ ಅವರನ್ನು ಮಹಾತ್ಮ ಗಾಂಧಿ ವೃತ್ತದಿಂದ ತಾಲೂಕು ಕ್ರೀಡಾಂಗಣದವರಿಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಮೆರವಣಿಗೆ ನಡೆಸಿದರು.
ಇದೇ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಸುದೀಪ್ ಮಾತನಾಡಿ ಪ್ರತಿಯೊಬ್ಬರು ಕನ್ನಡದ ಬಗ್ಗೆ ಗೌರವ ಇಡಬೇಕು ಕನ್ನಡ ಚಿತ್ರಗಳನ್ನು ಹೆಚ್ಚು ಹೆಚ್ಚು ನೋಡಬೇಕು ಆಗ ಮಾತ್ರ ಕನ್ನಡ ಸಿನಿಮಾಗಳು ಬೆಳೆಯಲು ಸಾಧ್ಯವಾಗುತ್ತದೆ ಅಭಿಮಾನಿಗಳೇ ನಮ್ಮ ಮನೆಯ ದೇವರುಗಳು ಪ್ರತಿಯೊಬ್ಬರು ಸರಳತೆಯಿಂದ ಜೀವನ ಸಾಗಿಸಬೇಕು, ನವ ವಧು ವರರು ಜೀವನದಲ್ಲಿ ಬರುವ ಕಷ್ಟ ಸುಖವನ್ನು ಸಮಾನವಾಗಿ ಸ್ವೀಕರಿಸಿ ಜೀವನ ಸಾಗಿಸಬೇಕು ಎಂದರು.



