ಮುದಗಲ್ ನಲ್ಲಿ ಕಳ್ಳತನ ಪ್ರಕರಣ: ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭೇಟಿ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್ : ಪಟ್ಟಣದ ಲಿಂಗಸ್ಗೂರು ರಸ್ತೆಯಲ್ಲಿ ಇರುವ ಕೆನರಾ ಬ್ಯಾಂಕ್ ನ ಎಟಿಎಂ ನಿಂದ ಹಣ ತೆಗೆದುಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ನ್ನು ಬದಲಾಯಿಸಿ 54000 ರೂಪಾಯಿಗಳನ್ನು ದೋಚಿ ಪರಾರಿಯಾದ ಪ್ರಕರಣ ನಡೆದಿದೆ. ಹಾಗೂ ಇತ್ತೀಚಿಗೆ ಸಮೀಪದ ರಾಮತ್ನಾಳ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೀಮಪ್ಪ ಪರಸಪ್ಪ ಕನ್ನಾಳ ಎಂಬ ವ್ಯಕ್ತಿ ಹಣ ತೆಗೆದುಕೊಳ್ಳಲು ಎಟಿಎಂಗೆ ತೆರಳಿರುವುದನ್ನೇ ಗಮನಿಸಿದ ಕಳ್ಳ ಹಣ ತೆಗೆದು ಕೊಡುವ ನೆಪದಲ್ಲಿ ಕಾರ್ಡ್ ಬದಲಾಯಿಸಿದ್ದಾನೆ. ನಂತರ ಲಿಂಗಸುಗೂರಿನ ವಿವಿಧೆಡೆ ಎಟಿಎಂ ಬಳಸಿ 54000 ರೂ. ಹಣ ದೋಚಿದ್ದಾರೆ. ಈ ಕುರಿತು ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಗೂ ರಾಮತ್ನಾಳ ಗ್ರಾಮದ ಶಂಕ್ರರಗೌಡ ವಿರುಪಣ್ಣ ಇಟಗಿ ಎಂಬುವವರ ಮನೆಯಲ್ಲಿ ಹಾಡುಹಗಲೇ 7 ತೊಲಿ ಬಂಗಾರ 1ಲಕ್ಷ 20 ಸಾವಿರ ನಗದು ಹಣ ದೋಚಿರುವ ಪ್ರಖರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರ ಪೊಲೀಸ್ ವರಿಷ್ಠಾಧಿಕಾರಿ ಹರೀಷ್ ಪೊಲೀಸ್ ಅಧಿಕಾರಿಗಳಿಂದ ಮಹಿತಿ ಪಡೆದು ರಾಮತ್ನಾಳ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಯ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮುದಗಲ್ ಠಾಣೆ ಪಿ.ಎಸ್.ಐ ವೆಂಕಟೇಶ ಮಾಡಗಿರಿ ಇನ್ನಿತರರು ಇದ್ದರು.


