Uncategorized
ನಿವೃತ್ತ ತಹಸೀಲ್ದಾರ ಹೂನೂರರವರಿಗೆ ಸೇವಾರತ್ನ ಪ್ರಶಸ್ತಿ

ಹನುಮಂತ ನಾಯಕ ಸಂಪಾದಕ. 973919997
ಲಿಂಗಸೂಗೂರು: ತಾಲೂಕಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಅಮರೇಶಪ್ಪ ಹೂನೂರರವರಿಗೆ ಇತ್ತೀಚೆಗೆ ರಾಯಚೂರಿನಲ್ಲಿ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರಾಯಚೂರಿನ ಕೃಷಿ ವಿವಿಯ ಶ್ರೀ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅಭಿನಂದನಾ ಸಮಾರಂಭದಲ್ಲಿ ಲಿಂಗಸಗೂರು ತಾಲೂಕಿನ ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷರಾದ ಅಮರೇಶಪ್ಪ ಹೂನೂರು ಮತ್ತು ಅವರ ತಂಡದ ಸೇವೆ ಗುರುತಿಸಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭೀಮಣ್ಣ ನಾಯಕ, ತಾಲೂಕಾ ನೌಕರರ ಸಂಘದ ಅಧ್ಯಕ್ಷರಾದ ಹಾಜಿಬಾಬು ಕಲ್ಯಾಣಿ, ಶರಣಬಸವರಾಜ ನಾಡಗೌಡ, ಯಲ್ಲಪ್ಪ, ಸಿದ್ದರಾಮಪ್ಪ ಕಾಣ್ಣೂರು, ಪಂಪನಗೌಡ ಪಾಟೀಲ್, ಮರಿಯಪ್ಪ, ಹಾಜೀಬಾಬು ಹೊಸಮನಿ,ಮಲ್ಲಾರೆಡ್ಡಿ ಸೇರಿದಂತೆ ಇದ್ದರು .



