Uncategorized
ನಾಳೆ ಟ್ಯಾಲೆಂಟ್ ಹಂಟ್ ಪರೀಕ್ಷೆ : ಡಾ. ಭಮಸಾಗರ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್ : ಸ್ಥಳೀಯ ಎಸ್.ಬಿ.ಭಮಸಾಗರ ಶಾಲೆಯಲ್ಲಿ ನಾಳೆ ಟ್ಯಾಲೆಂಟ್ ಹಂಟ್ ಪರೀಕ್ಷೆ ಯನ್ನು ನಡೆಸಲಾಗುವುದು ಎಂದು ಎಸ್.ಬಿ. ಭಮಸಾಗರ ಮೆಮೋರಿಯಲ್ ಟ್ರಸ್ಟ ನ ಕಾರ್ಯದರ್ಶಿ ಡಾ. ಸಂಜೀವ ಭಮಸಾಗರ ಹೇಳಿದರು. ಡಾ. ಸಂಜೀವ ಭಮಸಾಗರ ಗುರುವಾರ ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಸಂಸ್ಥೆಯಿಂದ ಕಳೆದ ಹಲವಾರು ವರ್ಷಗಳಿಂದ ಟ್ಯಾಲೆಂಟ್ ಹಂಟ್ ಎಂಬ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು ಈ ಬಾರಿಯೂ ಕೂಡ ಎಸ್.ಎಸ್.ಎಲ್ ಸಿ ಮಕ್ಕಳಿಗೆ 8 ರಂದು ಪಟ್ಟಣದ ಆರೋಮಾ ಪಿ.ಯು.ಸಿ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಗುವುದು ಎಂದರುವೀಗಾಗಲೇ ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಭಾಗದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪರೀಕ್ಷೆ ಕೈಗೊಂಡಿದ್ದು ೨೦ ಕ್ಕೂ ಹೆಚ್ಚು ಪ್ರೌಢಶಾಲೆಗಳ ೮೦೦ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ ಎಂದರು. ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದರು. ಜೊತೆಗೆ ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಫೀ ವಿನಾಯತಿ ನೀಡಲಾಗುವುದು ಎಂದರು. ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಭಯ ದೂರಮಾಡುವ ಸದುದ್ದೇಶ ದಿಂದ ಟ್ಯಾಲೆಂಟ್ ಪರೀಕ್ಷೆ ನಡೆಸಲಾಗುವುದು ಎಂದರು. ೨೦೨೬-೨೭ ನೇ ಸಾಲಿನಿಂದ ಸಿ.ಬಿ.ಎಸ್.ಈ ಪಠ್ಯಕ್ರಮದಂತೆ ೧ ರಿಂದ ೯ ರವರೆಗೆ ತರಗತಿಗಳನ್ನು ನಡೆಸಲು ಸರ್ಕಾರದಿಂದ ಪರವಾನಗಿ ಲಭಿಸಿದ್ದು ಪಟ್ಟಣದ ಜನತೆ ಹಾಗೂ ಗ್ರಾಮೀಣ ಭಾಗದ ಜನರು ತಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಲು ಪ್ರವೇಶ ಪಡೆದು ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಲಾಭ ಪಡೆಯುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮಲ್ಲಿಕೇಶ, ಮಂಜುನಾಥ ರೆಡ್ಡಿ, ರವಿಕುಮಾರ್, ವಿಶ್ವನಾಥ ಗಡಾದ ಇದ್ದರು.



