Uncategorized

ದುಬೈನಲ್ಲಿ ಸಿಲುಕಿದ ಸಿಂಧನೂರಿನ ಖ್ಯಾತ ಮಕ್ಕಳ ತಜ್ಞ ಶಿವರಾಜ ಕುಟುಂಬ

ಹನುಮಂತ ನಾಯಕ ಸಂಪಾದಕ.      9739109997

ಸಿಂಧನೂರು : ಕಳೆದ ವಾರ ದುಬೈ ಪ್ರವಾಸ ಕೈಗೊಂಡಿರುವ ಸಹನಾ ಆಸ್ಪತ್ರೆಯ ಮಕ್ಕಳ ತಜ್ಞ ಶಿವರಾಜ ಪಾಟೀಲ್ ಹಾಗೂ ಅವರ ಧರ್ಮಪತ್ನಿ ಜ್ಯೋತಿ ಪಾಟೀಲ್ ದುಬೈನ ವಿಮಾನಗಳ ಸಂಚಾರ ಸ್ಥಗಿತ ಆದ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್ ಒಂದರಲ್ಲಿ ಸಿಲುಕಿದ ಘಟನೆ ಜರಗಿದೆ.

ಇಸ್ರೇಲ್ ಹಾಗೂ ಅಮೆರಿಕ ಒಂದುಗೂಡಿ ಇರಾನ್ ಮೇಲೆ ಕದನ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ದುಬೈ ಪ್ರವಾಸ ಕೈಗೊಂಡಿರುವ ಡಾ.ಶಿವರಾಜ ಪಾಟೀಲ್ ಹಾಗೂ ಅವರ ಧರ್ಮಪತ್ನಿ ಜ್ಯೋತಿ ಪಾಟೀಲ್ ಇವರು ದುಬೈ ದೇಶದಿಂದ ಕರ್ನಾಟಕಕ್ಕೆ ಆಗಮಿಸುವ ವೇಳೆ ದುಬೈ ದೇಶ ವಿಮಾನ ಸಂಚಾರ ಸ್ಥಗಿತ ಗೊಳಿಸಿರುವ ಹಿನ್ನೆಲೆಯಲ್ಲಿ ಅಲ್ಲೇ ಭಯದ ವಾತಾವರಣದಲ್ಲಿ ಉಳಿದುಕೊಂಡಿರುವ ಪ್ರಸಂಗ ತಿಳಿದು ಬಂದಿದೆ.
ಯಾವುದೇ ದೇಶಕ್ಕೆ ತರಳಬೇಕಾದರೆ ದುಬೈ ವಿಮಾನ ನಿಲ್ದಾಣ ಮುಖ್ಯವಾಗಿರುತ್ತದೆ, ಎಲ್ಲಾ ವಿಮಾನಗಳು ದುಬೈ ನಿಲ್ದಾಣಕ್ಕೆ ಬಂದ ನಂತರವೇ ಇತರ ದೇಶಕ್ಕೆ ಹೋಗಲು ಸಾಧ್ಯವಾಗುತ್ತದೆ, ಇದೀಗ ಇಸ್ರೇಲ್ ಹಾಗೂ ಇರಾನ್ ನಡುವೆ ಆಗುತ್ತಿರುವ ಯುದ್ಧದಲ್ಲಿ ಅನೇಕರು ಮೃತಪಟ್ಟಿರುವ ಘಟನೆ ನಡೆದಿದೆ, ಇದರ ಹಿನ್ನೆಲೆಯಲ್ಲಿ ದೇಶದ ಅನೇಕ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚರ ವಹಿಸಿದ್ದಾರೆ, ಇದರ ಹಿನ್ನೆಲೆಯಲ್ಲಿ ದುಬೈಯಿಂದ ಬರುವ ವಿಮಾನಗಳು ಯಾವುದೇ ರೀತಿಯಲ್ಲಿ ಹಾರಾಡಲು ಸಾಧ್ಯವಿಲ್ಲದ ಕಾರಣ ಸ್ಥಗಿತ ಗೊಂಡಿರುವ ಹಿನ್ನೆಲೆಯಲ್ಲಿ ಸಿಂಧನೂರಿನ ಕುಟುಂಬದವರು ಸಿಲುಕಿಕೊಂಡಿರುವ ಘಟನೆ ನಡೆದಿದೆ.
ದುಬೈನಲ್ಲಿ ಡಾ. ಶಿವರಾಜ ಪಾಟೀಲ್ ಅವರಿಗೆ ಸನ್ಮಾನ : ಪ್ರತಿಷ್ಠಿತ ವಿಜಯ ರತ್ನ ಇಂಟರ್ ನ್ಯಾಷನಲ್ 2026 ಪ್ರಶಸ್ತಿಯನ್ನು ದುಬೈ ದೇಶದಲ್ಲಿ ಏರ್ಪಡಿಸಿರುವ ಕಾರಣ ಡಾ. ಶಿವರಾಜ್ ಪಾಟೀಲ್ ಹಾಗೂ ಅವರ ದಂಪತಿಯವರು ಸ್ವೀಕರಿಸಲು ತರಳಿರುವ ವೇಳೆಯಲ್ಲಿ ಈ ಘಟನೆ ನಡೆದಿದೆ.
ದೇಶಕ್ಕೆ ಕರೆದುಕೊಂಡು ಬರಲು ಕೇಂದ್ರಕ್ಕೆ ಒತ್ತಾಯ : ಭಾರತ ದೇಶದ ಅನೇಕ ಪ್ರಜೆಗಳು ದುಬೈ ದೇಶದಲ್ಲಿ ಸಿಲುಕಿರುತ್ತಾರೆ ಮತ್ತು ಇದರಲ್ಲಿ ಸಿಂಧನೂರಿನ ಹಿರಿಯ ವೈದ್ಯರು ಸಹ ಇದ್ದಾರೆ ಕೂಡಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ಎಚ್ಚೆತ್ತುಕೊಂಡು ವಿಮಾನ ವ್ಯವಸ್ಥೆ ಮಾಡಬೇಕು ಅಲ್ಲಿ ಮುಂದೆ ಯಾವುದೇ ರೀತಿಯಿಂದಲೂ ಸಮಸ್ಯೆ ಆಗುವ ಸಾಧ್ಯತೆಗಳು ಹೆಚ್ಚಿಗೆ ಇದ್ದಾವೆ . ಕೂಡಲೇ ಇದರ ಬಗ್ಗೆ ಕ್ರಮ ವಹಿಸುವ ಕೆಲಸ ಸರ್ಕಾರಗಳು ಮಾಡಬೇಕು ಎಂದು ಅನೇಕ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

ದುಬೈ ದೇಶದ ಹೋಟೆಲ್ ಒಂದರಲ್ಲಿ ಇದ್ದೇವೆ, ಇನ್ನೂ 4 ದಿನಗಳವರೆಗೆ ವಿಮಾನ ಹಾರಾಟ ಮಾಡೋದಿಲ್ಲ ಎಂದು ಇಲಿಯ ಅಧಿಕಾರಿಗಳು ಹೇಳುತ್ತಿದ್ದಾರೆ, ಕಲ್ಬುರ್ಗಿ ಹಾಗೂ ರಾಯಚೂರು ಭಾಗದಿಂದ ನಾನು ಮತ್ತು ನನ್ನ ಧರ್ಮಪತ್ನಿ ಇದ್ದೇವೆ ಮತ್ತು ಅನೇಕರು ಬಳ್ಳಾರಿ ಜಿಲ್ಲೆಯವರು ಇಲ್ಲೇ ಇದ್ದಾರೆ, ಖಾಸಗಿ ಹೋಟೆಲ್ ನಲ್ಲಿ ಅನೇಕರಿಗೆ ತುಂಬಾ ಖರ್ಚು ಆಗುತ್ತದೆ, ಒಂದು ಕುಟುಂಬಕ್ಕೆ ಕನಿಷ್ಠ ಒಂದು ದಿನಕ್ಕೆ 35 ಸಾವಿರದಿಂದ 50 ಸಾವಿರ ರೂ ಆಗುತ್ತದೆ, ಕೆಲವರು ಈಗಾಗಲೇ ಹೋಟೆಲ್ ಹೊರಗಡೆ ಕುಳಿತುಕೊಂಡಿದ್ದಾರೆ, ಅಧಿಕಾರಿಗಳು ಶಬ್ದ ಬಂದ ತಕ್ಷಣ ಆರನ್ ಹಾಕುತ್ತಾರೆ, ಎಲ್ಲರೂ ಒಳಗಡೆ ಹೋಗಬೇಕು ಇನ್ನು 2 ದಿನ ಬಿಟ್ಟರೆ ಅಂಡರ್ ಗೊಲ್ಡ್ ಒಳಗಡೆ ಹೋಗುವ ಸಾಧ್ಯತೆ ಇಲ್ಲಿ ಹೆಚ್ಚು ಕಾಣುತ್ತಿದೆ, ಈಗಾಗಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮಾತನಾಡಲು ಹನುಮನ ಗೌಡ ಬೆಡಗುರ್ಕಿ ಅವರಿಗೆ ತಿಳಿಸಿದ್ದೇವೆ ಹಿಂದೆ ಸಚಿವರು ಬೇರೆ ದೇಶಕ್ಕೆ ತರಲಿ ವಿಮಾನ ಮೂಲಕ ಕರೆದುಕೊಂಡು ಬಂದಿದ್ದಾರೆ.
ದುಬೈ ದೇಶದಲ್ಲಿ ಸಿಲುಕಿದ ಡಾ. ಶಿವರಾಜ ಪಾಟೀಲ್ ಸಿಂಧನೂರು

Hanumanth Nayaka

ಹನುಮಂತ ನಾಯಕ ಮಟ್ಟೂರಿನ ಸಾಂಸ್ಕೃತಿಕ ಪರಂಪರೆ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿರುವ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾದ ಹನುಮಂತ ನಾಯಕರು, “ಕಲ್ಯಾಣ ವೈಭವ” ಪತ್ರಿಕೆಯ ಗೌರವಾನ್ವಿತ ಸಂಪಾದಕರಾಗಿದ್ದಾರೆ. ಸಮೂಹ ಸೇವೆ, ಮಾಹಿತಿ ಹಂಚಿಕೆ ಮತ್ತು ಗ್ರಾಮೀಣ ಅಭ್ಯುದಯದ ಬಗ್ಗೆ ಅವರಿಗಿರುವ ಗಾಢ ಬದ್ಧತೆ ಅವರಿಗೆ ವಿಶಿಷ್ಟ ಗುರುತನ್ನು ತಂದಿದೆ. ಸಮಾಜದ ಪ್ರತಿಯೊಂದು ಮುಖ್ಯ ಕ್ಷಣ—ಮದುವೆ ಸಮಾರಂಭಗಳು, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾವಂತರ ಸಾಧನೆಗಳು ಮತ್ತು ಗ್ರಾಮಾಭಿವೃದ್ಧಿ ಚಟುವಟಿಕೆಗಳನ್ನು ನಿಖರವಾಗಿ ದಾಖಲಿಸಿ ಜನತೆಗೆ ತಲುಪಿಸುವುದು ಅವರ ಮುಖ್ಯ ಧ್ಯೇಯ. ಅವರ ಸಂಪಾದಕೀಯ ಶೈಲಿ ಸ್ಪಷ್ಟ, ಜವಾಬ್ದಾರಿಯುತ ಮತ್ತು ಓದುಗರನ್ನು ಜತೆಗೇ ಸಾಗಿಸುವಂತಿದೆ. ಮಟ್ಟೂರು ಪ್ರದೇಶದಲ್ಲಿ ನಂಬಿಕೆ, ನಿಷ್ಠೆ ಮತ್ತು ಸೇವಾಭಾವನೆಗೆ ಪ್ರತೀಕವಾಗಿ ಗುರುತಿಸಿಕೊಂಡಿರುವ ಹನುಮಂತ ನಾಯಕರವರು, ತಮ್ಮ ಮಾಧ್ಯಮದ ಮೂಲಕ ಸಮಾಜದ ಒಗ್ಗಟ್ಟು, ಸಂಸ್ಕೃತಿ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಗ್ರಾಮದ ಅಭಿವೃದ್ದಿಗಾಗಿ ತಮ್ಮ ಜ್ಞಾನ, ಸಮಯ ಮತ್ತು ಶ್ರಮವನ್ನು ವಿನಯದಿಂದ ಹೂಡುತ್ತಿರುವ ಅವರ ಕೆಲಸವು ಮಟ್ಟುರು ಸಮುದಾಯಕ್ಕೆ ಅಮೂಲ್ಯ ಕೊಡುಗೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!